Sunday, September 9, 2007

ನಾರಿ ಸಾಧನೆ

ಕಲ್ಲನ್ನು ಹೂವಾಗಿಸುವ ಕನಕಾ

ಮಹಿಳೆಯರು ಇಂದು ವಿಮಾನಯಾನ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ಪುರಷರ ಸರಿಸಮವಾಗಿ ತೊಡಗಿಸಿಕೊಂಡ್ದಿದಾರೆ. ಆದರೆ ಶಿಲ್ಪಕಲೆಯಲ್ಲಿ ಕೃಷಿ ಮಾಡಿ ಅದರಲ್ಲಿಯೇ ಪ್ರಸಿದ್ಧಿ ಪಡೆದ ಕೆಲವೇ ಕೆಲವು ಮಹಿಳಾ ಕಲಾವಿದರಲ್ಲಿ ಕನಕಾ ಮೂತರ್ಿ ಕೂಡಾ ಒಬ್ಬರು.ಟಿ. ನರಸೀಪುರದ ಸಾಂಪ್ರದಾಯಿಕ ಬ್ರಾಹ್ಮಣ ಮನೆತನದಲ್ಲಿ ಜನಿಸಿದ ಕನಕಾ ಕೈಯಲ್ಲಿ ಉಳಿ ಹಿಡಿಯುತ್ತೇನೆ ಎಂದಾಗ ಮನೆಯಲ್ಲಿ ವಿರೋಧಿಸದೆ ಅಚ್ಚರಿ ವ್ಯಕ್ತಪಡಿಸಿದರು. ಶಿಲ್ಪಕಲೆಯನ್ನು ಕಲಿಸುವ ಗುರುಗಳಾದರೂ ಎಲ್ಲಿ ಸಿಗುತ್ತಾರೆ ಎಂದು ಮನೆಯವರೇ ಪ್ರಶ್ನಿಸಿದರು. ಶಿಲ್ಪಕಲೆ ಕಲ್ಲಿನಷ್ಟೆ ಜಟಿಲ. ಪುರುಷ ಪ್ರಧಾನ ಮತ್ತು ಅದರಲ್ಲಿಯೂ ಸಾಂಪ್ರಾದಾಯಿಕ ಶಿಲ್ಪಕಲಾಕಾರ ವರ್ಗದವರು ಪ್ರೋತ್ಸಾಹ ನೀಡುವರೆ ಎಂದು ಸಂಶಯ ವ್ಯಕ್ತಪಡಿಸಿದರು.ಆದರೂ ಪ್ರಯತ್ನಿಸಿ ಮೊದಲು ಚಿತ್ರಕಲೆ, ನಂತರ ಕಲ್ಲನ್ನು ಹಿಡಿದು ಮೂರ್ತರೂಪತೆಯನ್ನು ತರಲು ಅಪಾರವಾಗಿ ಕನಕಾ ಶ್ರಮಿಸಿದರು.ಆಕೆಯಲ್ಲಿರುವ ಕಲೆ, ತಾದಾತ್ಮತೆಯನ್ನು ಗುರುತಿಸಿದ ಶಿಲ್ಪಿ ವಾದಿರಾಜ ಕಲೆಗೆ ಗುರುಗಳಾಗಲು ಸಮ್ಮಿತಿಸ್ದಿದು ದೊಡ್ಡ ಭಾಗ್ಯ ಎನ್ನುತ್ತಾರೆ. ಅನಂತರ ಸುಮಾರು ನಾಲ್ಕು ದಶಕಗಳ ಕಾಲ ಉಳಿ, ಸುತ್ತಿಗೆ ಹಿಡಿದುಕೊಂಡು ಈ ಕ್ಷೇತ್ರದಲ್ಲಿ ಸಾಧನೆ ಮಾಡಿ ಎತ್ತರಕ್ಕೆ ಕನಕಾ ನಿಂತ್ದಿದಾರೆ. ಅದರ ಹಿಂದೆ ಅವರ ಶ್ರಮ, ಅನುಭವಿಸಿದ ನೋವು ಎಲ್ಲವನ್ನು ಸುಮಾರು 10 ತಾಸುಗಳ ತಮ್ಮ ನಿರಂತರ ಕೆಲಸದಿಂದ ಮರೆಯಲು ಶ್ರಮಿಸುತ್ತಾರೆ. `ನನ್ನ ಆಸಕ್ತಿ ಪತಿಗೆ ಗೊತ್ತಿರದ್ದಿದರೂ ಮದುವೆ ಆದ ಮೇಲೆ ತುಂಬಾ ಪ್ರೋತ್ಸಾಹ ನೀಡಿದರು. ಮನೆಯಲ್ಲಿಯೇ ಸ್ಟುಡಿಯೊ ನಿಮರ್ಿಸುವಲ್ಲಿ ಕೂಡಾ ಅವರ ಸಹಕಾರ ಇದೆ' ಎನ್ನುತ್ತಾರೆ. ಸಾಂಪ್ರದಾಯಿಕ ಶಿಲ್ಪ, ವ್ಯಕ್ತಿ ಚಿತ್ರಗಳು ಮತ್ತು ನೂತನ ಕಲಾಮಾಧ್ಯಮದಲ್ಲಿ ಕೆಲಸ ಮಾಡ್ದಿದಾರೆ. ಹೆಚ್ಚಾಗಿ ಅವರು ಸಾಂಪ್ರದಾಯಿಕ ಶಿಲ್ಪಕಲೆಗಳನ್ನೇ ಕಡೆದ್ದಿದಾರೆ. ಶಿವ, ಗಣೇಶ, ದುಗರ್ೆ, ಕೃಷ್ಣಾ, ರಾಧೆ, ಬುದ್ಧ ಮುಂತಾದ ಶಿಲ್ಪಗಳು ಇಂದು ಅನೇಕ ದೇವಸ್ಥಾನಗಳಲ್ಲಿ ಪೂಜಿಸಲ್ಪಡುತ್ತವೆ. ವಿಶ್ವೇಶ್ವರಯ್ಯನವರ ಮೂತರ್ಿಯನ್ನು ಬೆಂಗಳೂರು ಎಂಜಿನಿಯರ್ಸ್ ಸಂಸ್ಥೆಯಲ್ಲಿ ಇಟ್ಟ್ದಿದಾರೆ. ಗಣೇಶನ ಮೂತರ್ಿಯನ್ನು ಸತ್ಯಸಾಯಿ ಆಶ್ರಮದಲ್ಲಿ ಪೂಜೆಗೆ ಇಟ್ಟ್ದಿದಾರೆ ಎನ್ನುತ್ತಾರೆ. ಯೂರೋಪ್ ಖಂಡದಲ್ಲಿ ಎಲ್ಲೆಡೆ ಸುತ್ತಿ ತಮ್ಮ ಕಲಾಪ್ರದರ್ಶನ ನಡೆಸ್ದಿದಾರೆ. ಕುವೆಂಪು, ಗಂಗೂಬಾಯಿ ಹಾನಗಲ್, ರಾಜಾರಾಮಣ್ಣ ಸೇರಿದಂತೆ ಅನೇಕರ ವ್ಯಕ್ತಿಚಿತ್ರಗಳನ್ನು ನಿಮರ್ಿಸಿ ಗಮನ ಸೆಳೆದ್ದಿದಾರೆ. ಶಿಲ್ಪಕಲಾ ಅಕಾಡೆಮಿ ಆಯೋಜಿಸಿದ ಶಿಬಿರಗಳ ನಿದರ್ೇಶಕರಾಗಿ ದುಡಿದ್ದಿದಾರೆ. ಅಕಾಡೆಮಿ ಸದಸ್ಯರಾಗಿ ಮೂರು ವರ್ಷಗಳ ಕಾಲ ಸೇವೆ ಸಲ್ಲಿಸಿದ ಅನುಭವ ಅವರಿಗೆ ಇದೆ. ಯಾವುದೇ ಸಂದರ್ಭದಲ್ಲಾದರೂ ತನ್ನನ್ನು ಮಹಿಳೆ ಎಂದು ಪರಿಗಣಿಸಬಾರದು. ಅದು ನನ್ನ ಪ್ರತಿಭೆಗೆ ಅರ್ಹತೆ ಆಗಬಾರದು ಎಂದು ಖಡಾಖಂಡಿತವಾಗಿ ಅವರು ಹೇಳುತ್ತಾರೆ. ಆ ಮೀಸಲಾತಿಯಿಂದ ನನ್ನ ಶ್ರಮಕ್ಕೆ ಕುಂದು ಬರುತ್ತದೆ ಎನ್ನಲು ಅವರು ಮರೆಯುವುದಿಲ್ಲ. ಪುರುಷರು ಮಾಡುವಷ್ಟೇ ಈ ಕೆಲಸವನ್ನು ಶ್ರದ್ಧೆಯಿಂದ ಮಾಡ್ದಿದೇನೆ. ಯಾವುದೆ ಒಂದು ಕಲ್ಲು ನನ್ನ ಕೈಗೆ ಬಂದರೆ ಅದರಲ್ಲಿ ಭಾವನೆಯನ್ನು, ವಾಸ್ತವವನ್ನು ತುಂಬಲು ತುಂಬಾ ಶ್ರಮಿಸುತ್ತೇನೆ. ಕಲ್ಲು ಕಲೆ ಆಗುವವರೆಗೂ ಅದನ್ನು ನಾನು ಬಿಡುವುದಿಲ್ಲ ಎಂದು ತಮ್ಮ ಕೆಲಸದ ಬಗ್ಗೆ ಇರುವ ಪ್ರೀತಿಯನ್ನು ಕೃತಿಗಳಲ್ಲಿಯೂ ತೋರಿಸ್ದಿದಾರೆ. ಇಂದು ಹೊಸ ಪೀಳಿಗೆಯ ಶಿಲ್ಪಕಲಾವಿದರ ಬಗ್ಗೆ ಸ್ವಲ್ಪ ಕೋಪ ಅವರಲ್ಲಿ ಇದೆ. ತಿಳಿದುಕೊಳ್ಳಬೇಕೆಂಬ ಉತ್ಸಾಹ ಕಡಿಮೆ. ಈ ಮಹಿಳೆಯೇನು ಹೇಳುತ್ತಾಳೆ ಅವರಿಂದ ಕಲಿಯುದೇನು ಎಂಬ ಭಾವನೆ ಕೆಲವರಲ್ಲಿ ಇದೆ. ಅದರಲ್ಲೂ ಒಂದು ಮೂತರ್ಿಯನ್ನು ಮಾಡುವ ಮುಂದೆ ಪೂರ್ವ ತಯಾರಿ ಮಾಡಿಕೊಳ್ಳಬೇಕು. ಅದನ್ನು ಚಿತ್ರದ ಮೂಲಕ ಬಿಡಿಸಿ ಆ ರೀತಿ ಕಡೆಯಬೇಕು ಆ ರೀತಿಯ ಅಭ್ಯಾಸವೇ ಈಗಿನವರಿಗೆ ಇಲ್ಲ ಎಂದು ವಿಷಾದಿಸುತ್ತಾರೆ. ಅನೇಕ ತೊಂದರೆಗಳ ಮಧ್ಯೆಯೂ ಇಂದು ಕನಕಾ ಮೂತರ್ಿ ಪ್ರಸಿದ್ಧ ಪಡೆದ ಶಿಲ್ಪಕಲಾವಿದೆ. ಜನರಿಗೆ ಅರ್ಥವಾಗುವಂತಹ ಹಾಗೂ ಸಾಂಪ್ರದಾಯಿಕ ಕಲೆಯನ್ನು ಅವರು ಹೆಚ್ಚು ಇಷ್ಟ ಪಡುತ್ತಾರಲ್ಲದೆ, ಆ ಕುರಿತು ತಮ್ಮ ಶಿಷ್ಯರಿಗೆ ಮಾರ್ಗದರ್ಶನ ಕೂಡಾ ನೀಡುತ್ತ್ದಿದಾರೆ. ಅವರ ಶಿಷ್ಯರಲ್ಲಿ ಮಹಿಳೆಯರು ಇಲ್ಲದೆ ಇರುವುದು ಅವರಿಗೆ ಬೇಸರ ತಂದಿದೆ. ಆದರೂ ಶಿಷ್ಯತ್ವ ಅರಿಸಿ ಬಂದರಿಗೆ ಅವರಿಗೆ ಕಲೆಯನ್ನು ಕೂಡಾ ಧಾರೆ ಎರೆಯಲು ಸಿದ್ಧರಾಗ್ದಿದಾರೆ. ಒಬ್ಬಳೇ ಮಗಳು ಸುಮತಿ ಹಿಂದೂಸ್ತಾನಿ ಕಲಾವಿದೆ. ಅನೇಕ ಕಡೆ ಕಾರ್ಯಕ್ರಮಗಳನ್ನು ನೀಡ್ದಿದಾಳೆ. ಒಳ್ಳೆಯ ಹೆಸರು ಭವಿಷ್ಯ ಇದೆ ಎಂದು ಸಂತೃಪ್ತ ವ್ಯಕ್ತಪಡಿಸುತ್ತಾರೆ.

ಮಹಿಳಾ ಸಂವೇದನೆಗೆ ಗಟ್ಟಿ ನೆಲೆ ಒದಗಿಸಿದ `ಗುಲ್ಬರ್ಗ ಮಹಿಳೆಯರು'
ಭಾರತದ ಹೆಣ್ಣು ಕುಟುಂಬದ ಗೌರವವೆಂದು ಗೌರವಿಸಲ್ಪಡುವಾಗ ಆಕೆಯ ನೋವು, ಹತಾಶೆ, ಹೋರಾಟಗಳು ಕೂಡಾ ಕುಟುಂಬ ಗೌರವದ ಅತ್ಯಂತ ಗೌಪ್ಯತೆಯ ವಿಚಾರವೆಂದೆ ಪರಿಗಣಿಸಲ್ಪಡುತ್ತದೆ. ಅವುಗಳ ಅಭಿವ್ಯಕ್ತಿ ಅಕ್ಷಮ್ಯ ಅಪರಾಧ ಕೂಡಾ, ಇದಕ್ಕೆ ತದ್ವಿರುದ್ಧವಾದ ಒಂದು ನಿಲುವುವನ್ನು ಇಲ್ಲಿಯ ಮಹಿಳಾ ಹೋರಾಟಗಾರರು ಅನುಸರಿಸಿಕೊಂಡು ಬಂದ್ದಿದು ಮಾತ್ರ ಸುಳ್ಳಲ್ಲ.
ವರದಕ್ಷಿಣೆ ಸಾವೇ ಇರಲಿ, ಗಂಡನ ಕಿರುಕುಳವೇ ಇರಲಿ, ದಲಿತ ಮಹಿಳೆಗೆ ಆದ ಅವಮಾನವೇ ಇರಲಿ ಅದನ್ನು ದೊಡ್ಡಮಟ್ಟದ ಹೋರಾಟಗಳನ್ನು ರೂಪಿಸಿ ಹೊರಜಗತ್ತಿನ ಗಮನ ಸೆಳೆದ್ದಿದಾರೆ.
ಅನಕ್ಷರತೆ, ನಿರುದ್ಯೋಗ, ಬರಗಾಲ, ಅನಿಷ್ಟ ಸಂಪ್ರದಾಯ, ಮೂಢನಂಬಿಕೆ ಮುಂತಾದ ಸಾಮಾಜಿಕ ಅನಿಷ್ಟತೆಯೇ ಹಾಸುಹೊಕ್ಕಾಗಿರುವ ಗುಲ್ಬರ್ಗ ಜಿಲ್ಲೆ ಎಲ್ಲ ರಂಗದಲ್ಲಿ ಹಿಂದುಳಿದಿದೆ ಎಂಬ ಮಾತನ್ನು ಅನೇಕ ಬಾರಿ ಕೇಳ್ದಿದೇವೆ. ಆದರೆ ಇಲ್ಲಿಯೇ ಇ್ದದು ಮಹಿಳೆಯರ ಜಾಗೃತಿ ಮೂಡಿಸುತ್ತಿರುವ ಮಹಿಳಾ ಹೋರಾಟಗಾರರ ಬಗ್ಗೆ ನಾವು ಕೇಳಲೇಬೇಕು.
ಆತ್ಮಹತ್ಯೆ, ಅಪಹರಣ, ಅತ್ಯಾಚಾರ, ಭ್ರೂಣಹತ್ಯೆ, ಕೌಟುಂಬಿಕೆ ಸಮಸ್ಯೆ ಮುಂತಾದ ಸಮಸ್ಯೆಗಳ ವಿರುದ್ಧ ಅವಿರತ ಹೋರಾಟವನ್ನು ಸಾಹಿತ್ಯದ ಸೇವೆ ಮಾಡುತ್ತಲೇ ಮಹಿಳೆಯರಿಗೆ ಧ್ವನಿ ಆದ ಸಾಹಿತಿ ಗೀತಾ ನಾಗಭೂಷಣ, ಸಮಾಜ ಸೇವೆಯ ಇಂದಿರಾ ಮಾನ್ವಿಕರ್, ಮಹಿಳಾ ಜಾಗೃತಿಯ ಕೆ. ನೀಲಾ ಮಂಚೂಣಿಯಲ್ಲಿ ನಿಲ್ಲುತ್ತಾರೆ.
ತಮ್ಮ ಸೇವೆಯಿಂದಲೇ ರಾಜ್ಯಾದಾದ್ಯಂತ ಮನೆ ಮಾತಾದ ಈ ಹೋರಾಟಗಾತರ್ಿಯರು ತಮ್ಮದೇ ಕ್ಷೇತ್ರಗಳಲ್ಲಿ ಇ್ದದುಕೊಂಡು ಮಹಿಳೆಯರಿಗೆ ಸಮರ್ಥ ಧ್ವನಿ ಒದಗಿಸ್ದಿದಾರೆ.
ಗೀತಾ ನಾಗಭೂಷಣ ಅವರು ದಲಿತ ಹಿನ್ನಲೆಯಿಂದ ಬಂದ ಲೇಖಕಿ. ದಲಿತರ ನೋವು, ನಲಿವು ಮುಂತಾದವುಗಳನ್ನು ಸಮಗ್ರವಾಗಿ ತಮ್ಮ ಸಾಹಿತ್ಯದಲ್ಲಿ ಮೂಡಿಸ್ದಿದಾರಲ್ಲದೆ, ಹಿಂದುಳಿದ ಮಹಿಳೆಯರು ಮುಂದೆ ಬರಬೇಕಾದರೆ ಶಿಕ್ಷಣ ಅತ್ಯಂತ ಅವಶ್ಯವಾದ್ದದು. ಅಂತಹ ಉನ್ನತ ಶಿಕ್ಷಣವನ್ನು ನಾವು ಪಡೆದರೆ ಈ ಎಲ್ಲ ಶೋಷನೆಗಳಿಂದ ಮುಕ್ತಾವಾಗುತ್ತೇವೆ ಎಂದು ಅವರು ತಮ್ಮದೆ ಉದಾಹರಣೆ ನೀಡುತ್ತಾರೆ. ಹೈಕ ಭಾಗದ ಯಾವುದೆ ಶಾಲೆ ಕಾಲೇಜುಗಳು ಸಮಾರಂಭಕ್ಕೆ ಕರೆದರೆ ಅವರು ಅತ್ಯಂತ ಖುಷಿಯಿಂದ ಭಾಗವಹಿಸಿ ಮಹಿಳೆಯರ ಶಿಕ್ಷಣದ ಬಗ್ಗೆಯೇ ಒತ್ತಿ ಹೇಳುತ್ತಾರೆ. ಅಲ್ಲದೆ ತಮ್ಮ ಕಾದಂಬರಿಗಳ ಮೂಲಕ ಮಹಿಳೆಗೆ ಉನ್ನತ ಸ್ಥಾನವನ್ನು ನೀಡುತ್ತಾರೆ.ಆಳಂದ ತಾಲ್ಲೂಕಿನ ಚಿಂಚನಸೂರಿನಲ್ಲಿ ಇರುವ ಆರಾಧ್ಯದೇವಿ `ಮಹಾಪೂರತಾಯಿಗೆ' ಬಿಡುವ ದೇವದಾಸಿ ಪದ್ಧತಿ ವಿರುದ್ಧ ಉಗ್ರ ಧ್ವನಿಯನ್ನು ಎತ್ತಿ `ಮಹಾಪೂರತಾಯಿ ಮಕ್ಕಳು' ಎಂಬ ಕಾದಂಬರಿಯನ್ನು ಬರೆದು ದೇವದಾಸಿಯರಲ್ಲಿ ಜಾಗೃತಿಯನ್ನು ಮೂಡಿಸ್ದಿದಾರೆ. ಪರಿಣಾಮವಾಗಿ ಈ ಅನಿಷ್ಟ ಪದ್ಧತಿ ಇಂದು ಸಂಪೂರ್ಣವಾಗಿ ನಿಂತು ಹೋಗಿದೆ.
ಅದೇ ರೀತಿ ಸಂಗಮೇಶ್ವರ ಮಹಿಳಾ ಮಂಡಳ ಸ್ಥಾಪಿಸುವುದರ ಮೂಲಕ ಗುಲ್ಬರ್ಗ ಜಿಲ್ಲೆಯಲ್ಲಿಯೇ ಒಂದು ಹೊಸಶಕೆಯನ್ನು ಆರಂಭಿಸಿದವರು ಇಂದಿರಾ ಮಾನ್ವಿಕರ, ಶ್ರೀಮಂತ ಕುಟುಂಬದಲ್ಲಿ ಜನಿಸಿ ಮಹಿಳಾ ಮಂಡಳದ ಸ್ಥಾಪನೆಯ ಮೂಲಕ ಹಗಲಿರುಳು ಮಹಿಳಾಭಿವೃದ್ಧಿಗೆ ಶ್ರಮಿಸ್ದಿದಾರೆ. `ಗುಲ್ಬರ್ಗ ಅಮ್ಮ' ಎಂದೇ ಖ್ಯಾತರಾದ ಮಾನ್ವಿಕರ ತಮ್ಮ ಸೇವೆಯಿಂದ ಸಮಸ್ತ ಮಹಿಳೆಯರ ಮನಸ್ಸನ್ನೇ ಗ್ದೆದ್ದಿದಾರೆ. ಮಹಿಳಾ ಸಹಾಯವಾಣಿ, ಸಾಂತ್ವಾನ ಕೇಂದ್ರ, ಅನಾಥ ಮಕ್ಕಳ ಕೇಂದ್ರಗಳ ಸ್ಥಾಪನೆ ಮೂಲಕ ಗುರುತರವಾದ ಕಾರ್ಯವನ್ನು ಮಾಡ್ದಿದಾರೆ. ಅವರ ಈ ಸೇವೆಯನ್ನು ಗುರುತಿಸಿ ಪ್ರಸ್ತುತ ವರ್ಷ ರಾಜ್ಯ ಸಕರ್ಾರ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದೆ.ಹೆಣ್ಣು ಭ್ರೂಣ ಹತ್ಯೆಯ ವಿರುದ್ಧ ವ್ಯಾಪಕವಾದ ಜಾಗೃತಿಯನ್ನು ಮೂಡಿಸುವಲ್ಲಿ ಕೆ.ನೀಲಾ ಪ್ರಮುಖರು. ಜಿಲ್ಲೆಯ ಹತ್ತು ತಾಲ್ಲೂಕು ಮತ್ತು ಹೈಕ ಭಾಗದ ಎಲ್ಲೆಡೆ ಪ್ರಚಾರ ನಡೆಸುತ್ತ್ದಿದಾರೆ. ಬಂಡಾಯ ಸಾಹಿತ್ಯದ ಮೂಲಕ ಮಹಿಳೆಯ ಹಕ್ಕು ಹಾಗೂ ದಲಿತ ಮಹಿಳೆ ಉನ್ನತಿಗೆ ಮಲ್ಲಿಕಾ ಘಂಟಿ, ಮೀನಾಕ್ಷಿ ಬಾಳಿ, ಶಾಂತಾ ಅಷ್ಟಗಿ, ಸರಸ್ವತಿ ಚಿಮ್ಮಲಗಿ ಅವರು ಸ್ಮರಣೀಯ ಕಾರ್ಯಮಾಡ್ದಿದಾರೆ.ಅಖಿಲ ಭಾರತ ಮಹಿಳಾ ಸಂಘಟನೆಯ ಮೂಲಕ ಮಹಿಳಾ ಹೋರಾಟಕ್ಕೆ ಜೀವ ತುಂಬಿದವರು ನಾಗಮ್ಮಾಳ್, ಮಹಿಳಾ ಸಮಾನತೆಯನ್ನೇ ಪ್ರಮುಖವಾಗಿ ಪರಿಗಣಿಸ್ದಿದ 12ನೇ ಶತಮಾನದ ಶರಣರ ಆಶಯ ಆಮೇಲೆ ಅಸ್ಪಷ್ಟವಾಗಿಯೇ ಉಳಿಯಿತು.ಕಾಲನ ತುಳಿತಕ್ಕೆ ಒಳಗಾಗಿ ಮಹಿಳೆಯರೇ ಧ್ವನಿಯನ್ನು ಕಳೆದುಕೊಂಡ್ದಿದರು. ಶರಣರು ನೀಡಿದ ಮಹಿಳಾ ಸ್ವಾತಂತ್ರ್ಯವನ್ನು ಮತ್ತೆ ಜಿಲ್ಲೆಯಲ್ಲಿ ಪುನರುಜ್ಜೀವನಗೊಳಿಸಿದವರು ಶ್ರೀಮತಿ ವಿಲಾಸವತಿ ಖೂಬಾ ಅವರು. ಮಾಜಿ ಉಪರಾಷ್ಟ್ರಪತಿ ಡಾ.ಬಿ.ಡಿ.ಜತ್ತಿ ಅವರ ಮಗಳಾಗಿ, ಇಲ್ಲಿಯ ಉದ್ಯಮಿ ಖೂಬಾ ಅವರನ್ನು ವರಿಸಿದ ನಂತರ ತಮ್ಮದೇ ಆದ ಸೇವಾ ಕಾರ್ಯವನ್ನು ಮಾಡುತ್ತಾ ಬಂದ್ದಿದಾರೆ. ಉಪನ್ಯಾಸ ಕಾರ್ಯಕ್ರಮ, ಪುಸ್ತಕ ಪ್ರಕಟಣೆ ಮುಂತಾದ ಸಾಹಿತ್ಯ ಕಾರ್ಯಗಳಿಗೆ ಮಹಿಳೆಯರಿಗೆ ಪ್ರಥಮ ಆದ್ಯತೆ ನೀಡುತ್ತಾರೆ.ಜಿಲ್ಲೆಯ ಹಲವಾರು ಮಹಿಳೆಯರು ಹೆಣ್ಣುಮಕ್ಕಳ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸು ನಿಟ್ಟನಲ್ಲಿ ಅಪರೋಕ್ಷವಾಗಿಯೇ ಸೇವೆ ಸಲ್ಲಿಸಿ ಸ್ತುತ್ಯಾರ್ಹವಾದ ಕಾರ್ಯ ಮಾಡಿ ಹಿಂದುಳಿದ ಭಾಗದ ಮುಂದುವರೆದ ಮಹಿಳೆಯರು ಎಂದೇ ಪ್ರಸಿದ್ಧರಾಗ್ದಿದಾರೆ.

1 comment:

Unknown said...

indu devara hesarinalli nimmantavaru swamigalaguttiddare! idakinth dodda duranta innenu..!!!
Keep it up SV good blogspot
-Giri