Sunday, September 9, 2007

ಲೇಖನಗಳು

ಹೆಳವರ ಬದಲಾದ ಸಾಂಸ್ಕೃತಿಕ ಬದುಕು

ಭಾರತದ ವೈವಿಧ್ಯಮಯ ಜನಾಂಗ ಮತ್ತು ವೃತ್ತಿಗಳು ಜಗತ್ತಿನ ಯಾವುದೇ ದೇಶಗಳಲ್ಲಿ ದೊರೆಯುದಿಲ್ಲ. ವಂಶಾವಳಿಗಳ ಮಾಹಿತಿಯನ್ನು ಹೇಳುತ್ತಾ ಹೊಟ್ಟೆ ಹೊರೆದುಕೊಳ್ಳುವ ಈ ಹೆಳವ ಜನಾಂಗ ಅತ್ಯಂತ ಪ್ರಾಚೀನ ಮತ್ತು ಅವರ ವೃತ್ತಿ ಕೂಡಾ ಅಷ್ಟೇ ಭಿನ್ನ.ಕನರ್ಾಟಕದಲ್ಲಿ ಸುಮಾರು ಒಂದು ಲಕ್ಷದಷ್ಟಿರುವ ಹೆಳವರು ಜಾಗತೀಕರಣ ಹಾಗೂ ಕಾಲನ ತುಳಿತಕ್ಕೆ ಸಿಕ್ಕು, ಅಳಿವಿನಂಚಿನಲ್ಲಿ ಇ್ದದಾರೆ. ನಿಶ್ಚಿತವಾಗಿ ಒಂದೆಡೆ ಇರದೆ ಊರು ಊರುಗಳನ್ನು ಸುತ್ತುತ್ತಾ ತಾವು ನಿಗದಿಪಡಿಸಿದ ಮನೆಯವರ ವಂಶಾವಳಿಯನ್ನು ಸಾರಿ. ಅವರು ನೀಡಿದ ದಾನವನ್ನು ಸ್ವೀಕರಿಸಿ ಅವರಿಗೆ ಹೊಗಳಿಕೆ ಹಾಡುಗಳನ್ನು ಹೇಳಿ ಹೋಗುತ್ತಾರೆ.``ತೂಗು ತೊಟ್ಟಿಲಾಗಲಿ, ಬೆಳ್ಳಿ ಬಟ್ಟಲಾಗಿ, ಬಂಗಾರದ ಹೊಗೆಯಾಗಿ, ಮನೆ ತುಂಬ ಮಕ್ಕಳಾಗಲಿ, ಬದುಕೆಲ್ಲ ಬೆಳಗಲಿ'' ಎಂದು ಯಾವಾಗಲೂ ಒಳ್ಳೆಯದನ್ನು ಬಯಸುವ ಹೆಳವರು. ಇಂದು ಆಥರ್ಿಕವಾಗಿ ಅತ್ಯಂತ ಹೀನ ಸ್ಥಿತಿಯಲ್ಲಿ ಇ್ದದಾರೆ. ಹೆಳವರ ಸಂಸಾರ: ಹೆಳವರ ಮೂಲ ಗುರು ಪುರಾಣದ ಕಾಲದ ಭೃಂಗಿ ಎಂದು ಹೇಳುತ್ತಾರೆ. ಆತನಿಂದ ಬಂದ ಈ ಪರಂಪರೆಯನ್ನು ಇಲ್ಲಿಯವರೆಗೂ ಮುಂದುವರಿಸಿಕೊಂಡು ಬಂದಿರುವುದಾಗಿ ಆ ಸಮಾಜದ ಹಿರಿಯರೊಬ್ಬರು ಹೇಳುತ್ತಾರೆ. ನಂತರ 12ನೇ ಶತಮಾನದಲ್ಲಿ ಭೃಂಗೇಶ ಶರಣರು ವಂಶಾವಳಿಗಳನ್ನು ಹೇಳುವ ಮೂಲಕ ವಚನಗಳನ್ನು ರಚಿಸಿ ಶರಣರ ಸಂದೇಶವನ್ನು ಮನೆ ಮನಕ್ಕೆ ಮುಟ್ಟಿಸಿದ ಅಪೂರ್ವವಾದ ಕೆಲಸ ಮಾಡಿ ಸ್ಮರಣೀಯರೆನಿಸಿಕೊಂಡ್ದಿದಾರೆ. ಇವರದೇ ಆದ ವಿಶೇಷ ಭಾಷೆ ಮೋಡಿ ಲಿಪಿ. ಇದರಲ್ಲಿ ಅವರು ಎಲ್ಲ ದಾಖಲೆಗಳನ್ನು ಸಮಗ್ರವಾಗಿ ದಾಖಲಿಸುತ್ತಾರೆ. ಇದು ತಲೆಮಾರುಗಳಿಂದ ನಡೆದುಕೊಂಡ ಬಂದ ಸಂಪ್ರದಾಯವಾಗಿದೆ. ಹೊಸ ಹೆಸರು ನಮೂದಿಸುವಾಗ ಇವರಿಗೆ ವಿಶೇಷವಾದ ಕಾಣಿಕೆಯನ್ನು ನೀಡಬೇಕಾಗುತ್ತದೆ. ಅಲ್ಲದೆ ಆ ವಂಶದ ಸಂಬಂಧಿಕರು ಎಲ್ಲಿಯೇ ಇರಲಿ ಅಲ್ಲಿಗೆ ಭೇಟಿ ನೀಡುತ್ತಾರೆ. ಅಲ್ಲದೆ ಹಿಂದಿನ ಕಾಲದಲ್ಲಿ ಕುಶಲವನ್ನು, ವಿವಿಧ ವಿಚಾರಗಳನ್ನು ಕೂಡಾ ಅವರು ತಿಳಿಸುತ್ತ್ದಿದರು. ಪತ್ರದಂತೆ, ಪೋನಿನಂತೆ ಕೆಲಸ ಮಾಡುತ್ತ್ದಿದರು. ವಧುವರರ ಅನ್ವೇಷನೆ ಕೂಡಾ ಮಾಡಿ ಮದುವೆಯ ಮಾಡಿಸುವ ಕಾರ್ಯವನ್ನು ಮಾಡುತ್ತ್ದಿದರು.ಬಂಡಿಗಳ ಮೂಲಕ ಊರಿಂದ ಊರಿಗೆ ಸಾಗುತ್ತಾರೆ. ಮನೆಗಳಿಂದ ಮೇವು, ಆಹಾರ ಧಾನ್ಯಗಳನ್ನು ಸಂಗ್ರಹಿಸುತ್ತಾರೆ. ಊರ ಹೊರಗೆ ಗುಡಿಸಲು ಹಾಕಿಕೊಂಡು ಸುತ್ತಲಿನ ಭಾಗದಲ್ಲಿ ಹೊತ್ತಿಗೆಯನ್ನು ಓದಿ ಮತ್ತೆ ಬರುತ್ತಾರೆ. ಕೆಲವರು ನಂದಿಯ ಮೇಲೆ ಊರಿಂದ ಊರಿಗೆ ಹೋಗುತ್ತಾರೆ. ಇವರು ನಂದಿಯನ್ನು ತಮ್ಮ ಆರಾಧ್ಯ ದೈವ ಎಂದು ತಿಳಿಯುತ್ತಾರೆ. ಕೆಂಪು ರುಮಾಲು, ಕೋರೆ ಮೀಸೆ, ಹಣೆಯ ಮೇಲೆ ಢಾಳವಾದ ವಿಭೂತಿ, ಉ್ದದನೆಯ ಚೀಲದಲ್ಲಿ ಪುರಾತನ ಪುಸ್ತಕವನ್ನು ನೇತು ಹಾಕಿಕೊಂಡು ಬಂದರೆ ಎಲ್ಲರೂ ಆತನ ಗುರುತು ಹಿಡಿಯುತ್ತಾರೆ. ರಾತ್ರಿ ಗೌಡರ ಮನೆಯಲ್ಲಿ ವಸತಿ ಮಾಡಿದರೆ, ಕಥೆಗಳನ್ನು ಹೇಳುವ ಮೂಲಕ ರಂಜಿಸುವ ಕೆಲಸವನ್ನು ಮಾಡುತ್ತಾರೆ. ಶಿಕ್ಷಣವಿರದೇ ಇ್ದದರೂ ತಂದೆಯಿಂದ ಬಂದ ಬಳವಳಿಯಂತೆ ಮೋಡಿ ಭಾಷೆಯನ್ನು ಚೆನ್ನಾಗಿ ಬಲ್ಲವರಾಗ್ದಿದಾರೆ.ಹೆಳವರಲ್ಲಿ ಪಂಗಡ: ಹೆಳವರಲ್ಲಿ ಪ್ರಮುಖವಾಗಿ ಎರಡು ಬಣ ನಂದಿ ಹೆಳವರು, ಗರುಡ ಹೆಳವರು. ನಂದಿ ಹೆಳವರು ಎತ್ತಿನ ಮೇಲೆ ಕುಳಿತು ವಂಶಾವಳಿಯನ್ನು ಸಾರಿದರೆ, ಗರುಡ ಹೆಳವರು ಮನೆಮನೆಗೆ ತೆರಳಿ ವಂಶ, ಕುಲ, ಗೋತ್ರ, ಬೆಡಗುಗಳನ್ನು ತಿಳಿಸುತ್ತಾರೆ. ಇವರು ಒಕ್ಕಲಿಕ ವೃತ್ತಿ ಮಾಡುವ ಒಕ್ಕಲಿಗ, ರಡ್ಡಿ, ಲಿಂಗಾಯತ ಜಾತಿಯವರ ಮನೆಗೆ ಮಾತ್ರ ಹೋಗಿ ಭಿಕ್ಷೆ ಬೇಡುತ್ತಾರೆ. ಇಲ್ಲಿ ಕೂಡಾ ಶ್ರಮ ಸಂಸ್ಕೃತಿಯನ್ನು ಕಾಣಬಹುದು. ನಂತರ ಬದಲಾವಣೆಯಲ್ಲಿ ಚಾಪೆ, ಹೆಳವರು, ಕಂಬಿ ಹೆಳವರು, ಮಂಡಲ ಹೆಳವರು, ದೂದಿ ಹೆಳವರು, ತಿತ್ತಿ, ಕೂಕಣಿ, ಊರ, ಅಡವಿ, ಪುಂಗಿ, ಸಾಧು, ತಂಬೂರಿ ಹೆಳವರು ಎಂದು ಇಷ್ಟು ಅನೇಕ ಪಂಗಡಗಳಿವೆ. ಅಲ್ಲದೆ ಹಂದಿ ಹೆಳವರು ಹಂದಿಯನ್ನು ಕಾಯುತ್ತ್ದಿದು, ಮಾಂಸಾಹಾರವನ್ನು ಸೇವಿಸುತ್ತಾರೆ. ಶಿವ ಮತ್ತು ಬಸವಣ್ಣ ಇವರ ಕುಲ ದೈವವಾಗ್ದಿದು, ಅಂಗಿ, ಧೋತರ, ಕರಿ ಕೋಟು, ಕೆಂಪು ರುಮಾರು, ಹೆಗಲೆ ಮೇಲೆ ಶಲ್ಯೆ, ವಿಭೂತಿ ಅವರ ವೇಷ ಭೂಷಣವಾಗಿದೆ. ಒಳಪಂಗಡದಲ್ಲಿ ನೆಂಟಸ್ಥಿಕೆ ಮಾಡುವುದು ಕಡಿಮೆ. ಉಳಿದಂತೆ ಹಿಂದೂ ಪದ್ಧತಿಯಂತೆ ಹಬ್ಬ ಹರಿದಿನಗಳನ್ನು ಆಚರಿಸುತ್ತಾರೆ. ಬದಲಾವಣೆ: 21ನೇ ಶತಮಾನದ ಸ್ಥಿತ್ಯಂತರಗಳಲ್ಲಿ ಅನೇಕ ಸಂಸ್ಕೃತಿ ನಶಿಸಿ ಹೋದಂತೆ ಹೆಳವರು ಸಂಸ್ಕೃತಿ ಕೂಡಾ ನಶಿಸುತ್ತಾ ಸಾಗಿದೆ. ಈಗಿನ ಯುವಕರು ಈ ವೃತ್ತಿಯನ್ನು ಮುಂದುವರಿಸಿಕೊಂಡು ಹೋಗಲು ಬಯಸುತ್ತಿಲ್ಲ. ಕೆಲವು ಕುಟುಂಬಗಳು ವಿದ್ಯೆಗೆ ಹೆಚ್ಚು ಮಹತ್ವ ನೀಡಿದರೆ, ಕೆಲವು ಯುವಕರು ಬೇರೆ ವೃತ್ತಿ ಹಿಡಿದ್ದಿದಾರೆ. ವಂಶಾವಳಿ ಹೇಳಿಕೊಂಡು ತಿರುಗಿದರೆ, ಅರೆ ಕಾಸಿನಿಂದ ಲಾಭವಿಲ್ಲ. ಅದರ ಬದಲಿಗೆ ಒಂದೆಡೆ ನೆಲೆ ನಿಂತು, ಬದುಕು ರೂಪಿಸಿಕೊಳ್ಳುವ ಹಂಬಲ ಹೆಚ್ಚಾಗಿ ಕಾಣುತ್ತೇವೆ. ನಗರದ ಅಥವಾ ದೊಡ್ಡ ಹಳ್ಳಿಗಳಲ್ಲಿ ಮನೆ, ಜಮೀನುಗಳನ್ನು ಕೊಂಡುಕೊಂಡು ಸಂಸಾರವನ್ನು ಆರಂಭಿಸ್ದಿದಾರೆ. ಇತ್ತೀಚೆಗೆ ಹೆಳವರು ಸಂಘಟನೆಯನ್ನು ಮಾಡಿಕೊಂಡು, ಸಮಾಜಕ್ಕೆ ಗುರುಗಳನ್ನು ಕೂಡಾ ನೇಮಕಮಾಡಿಕೊಂಡ್ದಿದಾರೆ. ಅವರೆಲ್ಲರ ಮಾರ್ಗದರ್ಶನದಿಂದ ಉತ್ತಮ ಬದುಕು ರೂಪಿಸಿಕೊಳ್ಳುವ ಕನಸು ಕಾಣುತ್ತ್ದಿದಾರೆ. ಇವತ್ತು ವಂಶಾವಳಿಗಳನ್ನು ಹೇಳುವ ಹೆಳವರು ಬೆರಳೆಣಿಕೆ ಸಂಖ್ಯೆಯಲ್ಲಿ ಮಾತ್ರ ಕಾಣುತ್ತಾರೆ. ಬದಲಾದ ಸನ್ನಿವೇಶದಲ್ಲಿ ಅವರನ್ನು ಪುಸ್ತಕಗಳಿಂದ ಅರಿತುಕೊಳ್ಳುವ ಕಾಲ ದೂರ ಉಳಿದಿಲ್ಲ.



ಇಲ್ಲಿ ಬೀಜಗಳೇ ಅಕ್ಷತೆ, ಸಲಹೆಯೇ ಮಂತ್ರ

ಮಠಗಳೆಂದರೆ ಸಾಮಾನ್ಯವಾಗಿ ಸ್ವಾಮೀಜಿ, ಮಂತ್ರ, ತಂತ್ರ, ಪೂಜೆ ಪುನಸ್ಕಾರ ಗಳು ನೆನಪಿಗೆ ಬರುತ್ತವೆ. ಆದರೆ ಗುಲ್ಬರ್ಗ ಜಿಲ್ಲೆಯ ಆಳಂದ ತಾಲ್ಲೂಕಿನ ಖಜೂರಿ ಕೋರಣೇಶ್ವರ ಮಠವೇ ಬೇರೆ. ಇಲ್ಲಿ ಬೂದಿ ನೀಡುವ ಸ್ವಾಮಿಗಳಾಗಲಿ, ಮಂತ್ರ ಹೇಳುವ ಪುರೋಹಿತರಾಗಲಿ ಇಲ್ಲ.ಇದು ಕೃಷಿ ಮಠ, ರೈತರ ನೆರವಿಗೆ ಸದಾ ಧಾವಿಸುತ್ತಿರುವ ಅಪರೂಪದ ಮಠ. ವೀರಶೈವ ಪರಂಪರೆಯಲ್ಲಿ ಬರುವ ಚೌಕಿಮಠಕ್ಕೆ ಸೇರಿದ ವಿಶಿಷ್ಟ ಮಠವಿದು.ಚೌಕಿಮಠ ಎಂದರೆ ಊರ ಹೊರವಲಯದಲ್ಲಿ (ಸೀಮೆ ಮಠ ಎಂದು ಕರೆಯುವುದು ಂಟು), ಮಠ ಇರುತ್ತದೆ. ಈ ಮಠದ ಕಾರ್ಯ ರೈತರಿಗೆ ಸಲಹೆ ನೀಡುವುದು, ಬೀಜಗಳ ರಕ್ಷಣೆ, ಬಿತ್ತುವ ದಿನ ಹಾಗೂ ವಿಧಾನವನ್ನು ಮಠದ ಸ್ವಾಮೀಜಿಗಳಿಂದ ಸಲಹೆ ಪಡೆದು ಕೃಷಿ ಮಾಡುವುದು ನೂರಾರು ವರ್ಷಗಳ ಹಿಂದೆ ನಡೆದುಕೊಂಡು ಬಂದ ಸಂಪ್ರದಾಯ. ಆದರೆ ಇಂದು ಕೆಲವು ಸ್ಥಿತ್ಯಂತರಗಳಿಂದ ಉತ್ತರ ಕನರ್ಾಟಕದ ಪ್ರತಿಹಳ್ಳಿಗಳಲ್ಲಿ ಇ್ದದ ಚೌಕಿಮಠಗಳು ಅವಸಾನಗೊಂಡಿವೆ. ಕೆಲವು ಸಂಸಾರದ ಹಾದಿ ಹಿಡಿದು ಅಡ್ಡ ಹೆಸರನ್ನು ಮಾತ್ರ ಉಳಿಸಿಕೊಂಡಿವೆ. ಇಂತಹ ಗೊಂದಲದ ಮಧ್ಯೆಯೂ ಖಜೂರಿ ಮಠ ಒಂದು. ಸಂಸ್ಥೆ ಮಾಡುವಷ್ಟು ಕೆಲಸವನ್ನು ಮಾಡಿದೆ. ಇಂತಹ ಮಠದ ಉದಾತ್ತವಾದ ಆದರ್ಶವನ್ನು ಮತ್ತೆ ಪುನರ್ ಜೀವ ನೀಡಿದವರು ಸದ್ಯದ ಪೀಠಾಧಿಪತಿ ಮುರುಘೇಂದ್ರ ಸ್ವಾಮೀಜಿ. ಉತ್ಸಾಹಿ ತರುಣರಾದ ಸ್ವಾಮೀಜಿ ಮಠದ ಅಧಿಕಾರ ವಹಿಸಿಕೊಂಡ ಮೇಲೆ ಸ್ವಾಮೀಜಿಗಳು ಬೂದಿ ಮಾತ್ರ ನೀಡುತ್ತಾರೆ ಎಂಬ ವ್ಯಂಗ್ಯವನ್ನು ಕಿತ್ತುಹಾಕಿ, ಆಧ್ಯಾತ್ಮದ ಜೊತೆ ಕೋಟ್ಯಂತರ ಜನರ ಜೀವನಾಡಿಯಾದ ಕೃಷಿಗೆ ಮೊದಲ ಆದ್ಯತೆ ನೀಡ್ದಿದಾರೆ.ಈ ಭಾಗದ ಕೃಷಿ ತಜ್ಞರನ್ನು ಹಾಗೂ ಧಾರವಾಡ ಕೃಷಿ ವಿವಿ ಜೊತೆ ಸಂಪರ್ಕ ಸಾಧಿಸಿ ರೈತರಿಗೆ ಸಲಹೆ, ಸಮಾಲೋಚನೆ, ಸಂವಾದ, ಹೋರಾಟ ಮುಂತಾದ ಕಾರ್ಯಗಳನ್ನು ಅವಿರತವಾಗಿ ಮಾಡುತ್ತಾ ಬಂದ್ದಿದು, ಜಿಲ್ಲೆಯ ಇತರ ಮಠಗಳಿಗಿಂತ ಭಿನ್ನವಾಗಿ ನಿಲ್ಲುವಂತೆ ಮಾಡಿದೆ.ಕನರ್ಾಟಕ ರಾಜ್ಯ ರೈತ ಮಾರ್ಗದಶರ್ಿ ಕೇಂದ್ರ ಎಂಬ ಸಂಸ್ಥೆಯನ್ನು ಸ್ಥಾಪಿಸಿ, ಪ್ರತಿವರ್ಷ ಕೋರಣೇಶ್ವರ ಜಾತ್ರೆ ನಡೆಯುವುದನ್ನು ರೈತ ಜಾತ್ರೆ ಎಂದು ಬದಲಾಯಿಸಿ ನೂತನ ಪರಂಪರೆಯನ್ನು ಹುಟ್ಟುಹಾಕ್ದಿದಾರೆ.ಘನಮಠದಾರ್ಯರ `ಕೃಷಿಜ್ಞಾನ ಪ್ರದೀಪಿಕೆ' ಎಂಬ ಮಹಾನ್ ಕೃಷಿ ಗ್ರಂಥವನ್ನು ಮೇಲ್ಪಂಕ್ತಿಯಲ್ಲಿ ಇಟ್ಟುಕೊಂಡು ರೈತರಿಗೆ ತಿಳಿವಳಿಕೆ ನೀಡುವ ಶ್ರಮವಹಿಸಿದೆ. ಅಮಜರ್ಾ, ಮುಲ್ಲಾಮಾರಿ ನದಿ ನೀರಿನ ಬಳಕೆಯಲ್ಲಿ ಸಕರ್ಾರದ ವಿಳಂಬವನ್ನು ಪ್ರತಿಭಟಿಸಿ ಹೋರಾಟ ಮಾಡಿದೆ. ಸಮರ್ಪಕ ವಿದ್ಯುತ್ ಪೂರೈಕೆ, ಸಾಲ-ಬಡ್ಡಿ ಮನ್ನಾ, ಬೀಜ ವಿತರಣೆ ಸೇರಿದಂತೆ ಹಲವಾರು ಹೋರಾಟಗಳಲ್ಲಿ ತನ್ನನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದೆ. ರಾಜ್ಯಾದ್ಯಂತ ಸಂಚರಿಸಿ ಮಠಗಳು ಕೃಷಿಯ ಬಗ್ಗೆ ಒಲವು ಮೂಡಿಸುವ ಕಾರ್ಯ ಮಾಡಬೇಕು ಎಂಬುದು ಸ್ವಾಮೀಜಿ ಅವರ ಒಲವು. ಅದಕ್ಕೆ ಆಥರ್ಿಕ ಅನಾನಕೂಲತೆ ಅಡ್ಡವಾಗಬಾರದು ಎಂಬುದು ಅವರ ಅಭಿಪ್ರಾಯ. ಆದರೂ ದಾನಿಗಳ ಸಹಾಯದಿಂದ ಈ ಮಹತ್ಕಾರ್ಯವನ್ನು ಮುನ್ನೆಡಿಸಿಕೊಂಡು ಹೋಗಬೇಕು ಎನ್ನುತ್ತಾರೆ. ವರ್ಷದ ಉ್ದದಕ್ಕೂ ಬರಗಾಲವನ್ನೇ ತನ್ನ ಉಸಿರಾಗಿಸಿಕೊಂಡ ಆಳಂದ ತಾಲ್ಲೂಕು. ಅಭಿವೃದ್ಧಿಯಲ್ಲಿ ಅತ್ಯಂತ ಹಿಂದುಳಿದಿದೆ. ಇದಕ್ಕೆ ಕಾರಣ ಅಂತರ್ಜಲ ಮಟ್ಟದ ತೀವ್ರ ಕುಸಿತ. ಈ ನಿಟ್ಟಿನಲ್ಲಿ ಕೆರೆ, ಚೆಕ್ ಡ್ಯಾಂಗಳ ನಿಮರ್ಾಣ ಮಾಡುವ ಮೂಲಕ ಅಂತರ್ಜಲ ವೃದ್ಧಿ ಮಾಡುವುದು. ಇರುವ ಜಲವನ್ನು ಸಮರ್ಥವಾಗಿ ಉಪಯೋಗಿಸಿಕೊಂಡು ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವುದಾಗಿದೆ. ಈ ನಿಟ್ಟಿನಲ್ಲಿ ತಾಲ್ಲೂಕಿನ ಜನರಲ್ಲಿ ಜಾಗೃತಿ ಮೂಡಿಸುವ ಉ್ದದೇಶ ಇವರಿಗೆ ಇದೆ. ಈ ಉ್ದದೇಶವನ್ನು ಈಗಾಗಲೇ ಶಾಸಕ ಬಿ.ಆರ್.ಪಾಟೀಲರ ನೇತೃತ್ವದಲ್ಲಿ ನಡೆಯುತ್ತಿದೆ. ಇಬ್ಬರ ಸಮನ್ವಯದಿಂದ ತಾಲ್ಲೂಕಿನ ಅಭಿವೃದ್ಧಿಯಾದರೆ ದೇಶಕ್ಕೆ ಮಾದರಿಯಾಗಬಹುದು.

No comments: