Sunday, September 9, 2007

ಕವನ

ನಿಲ್ಲಿ ಮೋಡಗಳೆ

ನಿಲ್ಲಿ ಮೋಡಗಳೆ
ಕಾದ ನೆಲಕೆ ಹನಿಯ
ನೀರು ಸುರಿಸಿಬೆಚ್ಚಾಗಾದ ನನ್ನ
ಎದೆಯ ತಂಪುಗೊಳಿಸಿನಿಲ್ಲಿ ಮೋಡಗಳೇ...
ಎಲ್ಲಿ ಓಡುವಿರಿ?
ದಿಬ್ಬಣಕ್ಕೆ ಸಾಗುವ ಉತ್ಸಾಹದಲ್ಲಿ
ಮರೆಯದಿರು ಈ ಧರೆಯ ಎಂದೆಂದಿಗೂ
ನಿಂತು ಹನಿ ಹನಿಸಬಾರದೇಕೆ
ಸೂರ್ಯನ ಭಯವೇ ವರುಣದೇವ
ನಿನಗೆಸೂರ್ಯನ ಉಗ್ರಪ್ರತಾಪಕೆ ಮಟ್ಟ
ಹಾಕಿಅಲ್ಪವಾದರೂ ತಂಪಿನ ಕಂಪು ಸುರಿಸಬಾರದೇ
ಸೂರ್ಯನೆಂದರೆ ಈ ನಾಡಿಗೆ ಅಚ್ಚುಮೆಚ್ಚು
ಛಾಯಾದೇವಿಯನೆನಪಿನ ಕಿಚ್ಚಿನಲ್ಲಿ
ಸದಾ ಸುರಿಸುವ ಬೆಂಕಿಉಂಡೆಗೆ,
ವರುಣದೇವ ಮಳೆಯ ಸಿಂಚನ ಗೈಯಬಾರದೇಕೆ


ಜಂಜಾಟ
ಜಗವೆಲ್ಲ ಮಲಗಿರಲು ಅವನೊಬ್ಬ ಎ್ದದಲೋಕದ
ಜಂಜಾಟದಲಿ ಬ್ದಿದವರನು ಕೈ ಹಿಡಿದು
ಎತ್ತಿ ಬೆಳಕಿನೆಡೆಗೆ ತಂದಮೋಕ್ಷ ಮಾರ್ಗದಲಿ,
ಶಾಂತಿಯ ತೋಟದಡಿ ನಿಂತ
ಸಿದ್ಧ ಬುದ್ಧನಾದದು ರೋಚಕಅಂತೆಯೇ
ಜಗತ್ತಿಗೆ ಎಲ್ಲ ಸೋಜಿಗರೋಗ ರುಜಿನಗಳ,
ದಾಸ್ಯದ ಶೃಂಖಲೆಯ ಕೊಂಡಿ ಕಳಚಿಕಂಡುಕೊಂಡ
ಸತ್ಯದ ಶಾಶ್ವತವಾದ ಬದುಕಿಗೆ ಉತ್ತರವನು.
ಊಟವಿಲ್ಲದೆ ಮಾಡಿದ ತಪಸ್ಸಿನಿಂದ ಸಿಕ್ಕಿತೇ
ಸಿದ್ಧಿ?ಮೂಳೆ ಮಾಂಸ ಚಕ್ಕಳವಾದವೇ ಹೊರತು
ಮತ್ತೇನೂ ಅಲ್ಲ.ರಮ್ಯ, ರೌದ್ರ ಪ್ರಕೃತಿಯ ಮಡಿಲಿನಲ್ಲಿ
ಮಲಗಿಆನಂದಿಸಿ ಅನುಭವಿಸಿ ಮಾಡಿದ ತಪ್ಪಸ್ಸೇ
ಜ್ಞಾನೋದಯಅದೇ ಬುದ್ಧ ಪೂಣರ್ಿಮಾ

ಆತ ಅರ್ಥವಾಗಲೇ ಇಲ್ಲ....

ರೋಶಾವೇಷದಿಂದ ಹೇಳ್ದಿದೇ ಕೊನೆನನಗೆ ಎಂದು
ಮುಖ ತೋರಿಸಬೇಡೆಂದುತೋರಿಸಬಾರದ
ಮುಖ ಮುಚ್ಚಿಕೊಂಡು ಕುಳಿತರೂಸ್ಮೃತಿಪಟಲದಲ್ಲಿ
ಅಚ್ಚೊತ್ತಿದಂತಹ ಮುದ್ರೆ
ಕಪ್ಪು,ಒರಟು, ನಯನಾಜೂಕಿಲ್ಲ, ಚಂದದ ಮಾತು
ಇಲ್ಲಆದರೆ ಚೆಲುವ, ಹೃದಯಯುಳ್ಳವ ತನ್ನ ಮಾತೇ
ಕೊನೆಹಾಗೆಂದರೆ ಹೇಗೆ ಎಂದು ಪ್ರಶ್ನಿಸಿದರೆನೇ
ಜಗಳಸಮರಸವೇ ಜೀವನವಲ್ಲವೇ ಎಂದರೆ ಮೌನ
ನಿತ್ಯ ಸ್ವಲ್ಪ ಜಗಳ, ಅವನನ್ನು ಕಂಡರೆ ನನಗೆ
ಭಯಆದರೆ ಆಳದಲ್ಲಿಯೆಲ್ಲ ಪ್ರೀತಿಯ ಬುಗ್ಗೆ,
ಹೇಳಲು ಆಗದ ಚಡಪಡಿಕೆಅವನಿಗೂ ಅದೇ
ಎನ್ನುವ ಭಾವ ನನ್ನದುಯಾರಿಗೆ ಗೊತ್ತು,
ಗೊತ್ತುಗುರಿಯಿಲ್ಲ ಹುಚ್ಚು ಮನಸಿಗೆ
ಹೀಗೆ ಅವನು ಕಡೆಗೂ ನನಗೆ ಅರ್ಥವಾಗಲಿಲ್ಲ
ಮೊನ್ನೆ ರಸ್ತೆಯಲ್ಲಿ ಸಿಕ್ಕಾಗ ಕೃಶವಾದ
ಶರೀರ ಕಪ್ಪುಮುಖದ ಮೇಲೆಕಪ್ಪುಕಲೆ,
ಹೊಟ್ಟೆ ತೊಳೆಸಿದಂತಾಯಿತು,
ಮಾತು ಇಲ್ಲಅದೇ ಒರಟು ಒಂದು ಕ್ಷಣ
ಬೇಸರವಾಯಿತೆನಿಸಿ
ನಾನೇ ಅಂದೆ ನನಗೆ ಎಂದೂ ಸಿಗಬೇಡ!

No comments: