Sunday, September 9, 2007

ಪ್ರವಚನ

ದೇವರನ್ನು ವಿರೋಧಿಸಿ ಬದುಕಿದವರುಂಟೆ?

ಇದು ಸರ್ವಕಾಲದಲ್ಲೂ ಎಲ್ಲರನ್ನು ಕಾಡಿದ ಪ್ರಶ್ನೆ. ಮನುಷ್ಯ ಎಷ್ಟೇ ಪ್ರಗತಿಪರನಾದರೂ ನಾಸ್ತಿಕನಾದರೂ ಆತ ದೇವರ ಪ್ರಭಾವದಿಂದ ಹೊರಬಂದಿಲ್ಲ. `ದೇವರು' ಎಂಬ ಹೆಸರನ್ನು ಕೂಡಾ ಅವನು ನಿರಾಕರಿಸಲು ಹೆದುರುತ್ತಾನೆ.ದೇವರ ಅಸ್ತಿತ್ವ ಮತ್ತು ನಂಬಿಕೆ ಕುರಿತು ಅನೇಕ ಉದ್ಘ್ರಂಥಗಳು ಬಂದಿವೆ. ದೇವರನ್ನು ನಂಬುವ ಮೂರು ವರ್ಗದವರನ್ನು ನಾವು ಗುರುತಿಸಬಹುದು. ಬಹುದೇವೋಪಸಕರು, ಏಕದೇವೋಪಾಸಕರು, ನಾಸ್ತಿಕರೆಂದು.ಬಹುದೇವೋಪಾಸಕರು ಮಣ್ಣು, ಕಲ್ಲು, ಕಟ್ಟಿಗೆ, ಕಬ್ಬಿಣ, ಕಣಜ, ಬೆಳ್ಳಿ, ಬಂಗಾರ, ಆನೆ, ಇಲಿ, ಕುರಿ, ಕೋಳಿ, ಕೋಣ, ಆಕಳು, ರಾಕ್ಷಸಿ ಎಲ್ಲವನ್ನೂ ದೇವರೆಂದೆ ಪೂಜಿಸುತ್ತಾರೆ. ಇನ್ನು ಏಕದೇವೋಪಸಕರು ತಮಗೆ ಇಷ್ಟವಾದ, ಮಹಮ್ಮದ ಪೈಗಂಬರ, ಬುದ್ಧ, ಮಹಾವೀರ, ಏಸು, ಬಸವಣ್ಣ, ಆಂಜನೇಯ, ಶ್ರೀಹರಿ ಮುಂತಾಗಿ, ಇನ್ನೂ ನಾಸ್ತಿಕರು ಮಾನವೀಯತೆ, ಸತ್ಯ, ಪ್ರಾಮಾಣಿಕತೆ, ಪ್ರಕೃತಿ, ಸೌಂದರ್ಯವನ್ನು ದೇವರೆಂದು ಪೂಜಿಸುತ್ತಾರೆ. ಆದರೆ ಯಾರೂ ದೇವರು ಎಂಬ ಶಬ್ದವನ್ನು ನಿರಾಕರಿಸುವ ಧೈರ್ಯ ತೋರಿಲ್ಲ. ಹಾಗಾದರೆ ದೇವರೇ ಇಲ್ಲದಂತೆ ಮಾಡಿದರೆ ಹೇಗೆ ಎಂಬ ಜಿಜ್ಞಾಸೆ ಬಹುದಿನದಿಂದ ನನ್ನನ್ನು ಕಾಡ್ದಿದಿದೆ. ಅಳಕೂ ಕೂಡಾ ಆಗುತ್ತದೆ. ಪೊಲೀಸರಿಲ್ಲದ ರಾಜ್ಯದಂತೆ ಆಗುತ್ತದೆಯೇ ಎಂದು. ಅನಾಗರಿಕ ಮಾನವ ತನ್ನ ಅಭಿಲಾಷೆ, ಮನೋಲ್ಲಾಸಕ್ಕೆ ಸೀಮಿತತೆಯನ್ನು ಪಡೆದಾಗ ಈ ಎಲ್ಲ ಸಮಸ್ಯೆ ಉದ್ಭವಾಗಿವೆ. ಎಲ್ಲೆಂದರಲ್ಲಿ ತಿಂದು, ಮಲಗಿ, ಎ್ದದು ನಿರಾಳನಾಗ್ದಿದ ಆತನ ವಿಕಾಸವಾದದಿಂದ ತನ್ನ ಪ್ರದೇಶ, ಹೊಲ, ಮನೆ, ಹೆಂಡತಿ, ಮಕ್ಕಳು ಎಂದು ಗೋಜಲನ್ನು ತುಂಬಿಕೊಂಡಾಗ, ಅವರ ರಕ್ಷಣೆಗೆ ಸ್ವಾರ್ಥ, ದಾಹ, ಮೋಸ ಮುಂತಾದ ಅನಿಷ್ಟಗಳನ್ನು ಕಂಡು ಕೊಂಡ, ತನ್ನದೇ ನಡೆಯಬೇಕು ಎಂಬ ಸಮರೋತ್ಸಾಹದಲ್ಲಿ ತನಗೆ ಎದುರಾದವರನ್ನೆಲ್ಲ ನಿಣರ್ಾಮ ಮಾಡಿದ.ನಂತರ ಹೇಗಾದರೂ ಅವರನ್ನು ಅಂಕೆಯಲ್ಲಿ ಇಟ್ಟು ಕೊಳ್ಳಬೇಕು ಎಂಬ ದೂರಾಲೋಚನೆ ಮತ್ತು ದುರಾಲೋಚನೆ ಒಟ್ಟಿಗೆ ಸೇರಿಸಿ ದೇವರು ಎಂಬ ಭಯದ ಗುಮ್ಮನನ್ನು ಕಾಪಾಡುವ ಪೊಲೀಸನನ್ನು ನಿಮರ್ಿಸದನೆ ಎಂಬ ಸಂದೇಹ ಬರುತ್ತದೆ. ನಂತರ ಧರ್ಮವನ್ನು ಸ್ಥಾಪಿಸಿ ಅದಕ್ಕೆ ನೀತಿ ನಿರೂಪಕರನ್ನು ನೇಮಿಸಿ ಒಂದು ವ್ಯವಸ್ಥೆ ಎಡೆಗೆ ತಂದಂತೆ ಕಾಣುತ್ತದೆ. ತಿಳಿವಳಿಕೆ ಬಂದ ಮನುಷ್ಯ ಆ ಧರ್ಮದ ನೂನ್ಯತೆಗಳನ್ನು ಖಂಡಿಸಿದಾಗ ಸಹಜವಾಗಿ ಧರ್ಮ ಸಂಘರ್ಷ ನಡೆದಂತೆ ತೋರುತ್ತದೆ. ಇದರಿಂದ ಆರಂಭಗೊಂಡ ಮನುಷ್ಯ ಮನುಷ್ಯರ ನಡುವಿನ ಅಂತಕಲಹಃ ಆತನ ಬದುಕ ಅನ್ನು ಝರ್ಜರಿತಗೊಳಿಸಿತು ಎನ್ನಬಹುದು. ಧರ್ಮ ಯುದ್ಧದ ನಂತರ ರಾಜನ ಆಳ್ವಿಕೆ, ಆತನ ಮೇಲೆ ಈತ, ಈತನ ಮೇಲೆ ಆತ ಎಂದು ಯುದ್ಧವನ್ನು ಸಾರಿ ತನ್ನದಲ್ಲದ ಪ್ರದೇಶವನ್ನು ಆಕ್ರಮಿಸಿಕೊಂಡು ಭುವನೈಕ್ಯ ಮಲ್ಲ, ಚಕ್ರವತರ್ಿ, ತ್ರೀಲೋಕ ಒಡೆಯ, ಭುವನಪತಿ ಎನಿಸಿಕೊಳ್ಳುವುದರಲ್ಲಿ ಉತ್ಸಾಹ ತೋರಿಸ್ದಿದಾನೆ. ಕಷ್ಟದಿಂದ ಸಾಮ್ರಾಜ್ಯ ಗ್ದೆದ ಮೇಲೆ ಅಲ್ಲಿ ವೈಭವವಿರಬೇಕಲ್ಲವೇ ಎಂಬ ಮಾನವ ಸಹಜ ಆಶೆ (ದುರಾಶೆ ಎನ್ನಲೂ ಬಹುದು) ಆನೆ, ಒಂಟಿ, ಊಳಿಗ, ಬಂಗಾರ, ಸಿಂಹಾಸನ, ನೃತ್ಯ, ದಾಸ, ದಾಸಿ, ಗುಲಾಮಿ ಮುಂತಾದ ಪರಂಪರೆಗಳು ಸಹಜವಾಗಿ ಎ್ದದು ಬಂದಂತೆ ಕಾಣುತ್ತದೆ.ಇನ್ನು ರಾಜರ ಅಧಿಕಾರ ಶಾಶ್ವತವಾಗಬೇಕೆಂದರೆ, ಹೊಗಳು ಭಟ್ಟರು ಬಚಾವ್ ಅಗಬೇಕೆಂದರೆ ರಾಜಾ ಪ್ರತ್ಯಕ್ಷ ದೇವತೆ ಎಂದು ಜನರಲ್ಲಿ ಭಯ ಹುಟ್ಟಿಸಲಾಯಿತು. ನಂತರ ಆತನ ಹಿಂದಿರುವ ಗುರು ಅಥವಾ ಆಚಾರ್ಯರರನ್ನು ದೇವರು ಎನ್ನಲಾಯಿತು. ಉ್ದದೇಶ ಇಷ್ಟೆ ಅವರನ್ನು ಅವಲಂಬಿಸಿದ ಇವರು, ಇವರನ್ನು ಅವಲಂಬಿಸಿದ ಅವರು ವ್ಯವಸ್ಥಿತವಾಗಿ ತಮ್ಮ ಭೋಗವಿಲಾಸವನ್ನು ಶಾಶ್ವತವಾಗಿಸಿಕೊಂಡರು.ಜನಸಾಮಾನ್ಯ ಮಾತ್ರ ಮೇಲೆ ಹೇಳಿದಂತೆ ಎಲ್ಲ ಕಾಲದಲ್ಲೂ ಕಡೆಗಣೆನೆಗೆ ಒಳಗಾದ, ನೋವು, ಅವಮಾನ ಅನುಭವಿಸಿ ಹೇಳಿದ ಕೆಲಸವನ್ನು ಮಾಡಿಕೊಂಡು ತನ್ನ ಚೈತ್ಯಯಾತ್ರೆಯನ್ನು ಮುಗಿಸಿದ. ನಂತರ ಒಂದು ಹೊಸ ಉ್ದದೇಶದೊಂದಿಗೆ ಧರ್ಮ ಆರಂಭವಾಯಿತು ಎಂದು ಹೇಳಬಹುದು. ಧರ್ಮ ಒಳ್ಳೆಯವರಿಗಲ್ಲ. ಕೆಟ್ಟವರನ್ನು ಒಳ್ಳೆಯವರನ್ನಾಗಿ ಮಾಡುವುದೇ ಧರ್ಮದ ಆಶಯವಾಗಬೇಕು ಎಂಬ ವಿಚಾರ ಆರಂಭವಾಯಿತು. ಕಾಡು ಮನುಷ್ಯರನ್ನು, ಕಳ್ಳರನ್ನು, ದುಷ್ಟರನ್ನು, ರಾಕ್ಷಸಿ ಪ್ರವೃತ್ತಿಯವರನ್ನು ಪರಿವತರ್ಿಸಿ ಸಮಾಜದ ಮುಖ್ಯ ವಾಹಿನಿಗೆ ತಂದ ಬಗ್ಗೆ ಅಲ್ಲಲ್ಲಿ ಕಂಡು ಬರುತ್ತದೆ.ಕೊನೆಯದಾಗಿ ಎಲ್ಲ ಧರ್ಮದ ಆಶಯಗಳು ಉತ್ತಮವಾಗ್ದಿದರೂ ಅದನ್ನು ಅಥರ್ೈಸಿಕೊಳ್ಳುವುದರಲ್ಲಿ ನಾವು ಸೋತ್ದಿದೇವೆ ಎಂದೇ ಹೇಳಬಹುದು. ಆ ಧರ್ಮ, ಈ ಧರ್ಮ ಮೇಲು ಎಂದು ಎಲ್ಲರನ್ನು ಅಥವಾ ಅವರರ ಧಮರ್ೀಯರನ್ನು ಮೆಚ್ಚಿಸುವ ದೊಡ್ಡ ಭಾಷಣವನ್ನು, ಬೃಹದ್ ಗ್ರಂಥವನ್ನು ರಚನೆ ಮಾಡ್ದಿದೇವೆ. ಆದರೆ ಎಲ್ಲ ಧರ್ಮಗಳ ಸಾರ ಒಂದೆ. ಶಾಂತಿ, ಮಾನವೀಯತೆ, ಪ್ರಾಮಾಣಿಕತೆ, ಸಹಬಾಳ್ವೆ, ಒಳ್ಳೆಯ ಕಾರ್ಯಗಳಾಗಿವೆ. ಆದರೆ ಇಂದು ದೇವರು, ಧರ್ಮಗಳ ಹೆಸರಿನಲ್ಲಿ ನಡೆದ್ದಿದಾದರೂ ಏನು?

No comments: